ಇತ್ತೀಚಿನ ಸುದ್ದಿರಾಜ್ಯ

ಹುಲಿ ಹೆಜ್ಜೆ‌ ಆತಂಕಗೊಂಡ ರೈತರು

ಚಾಮರಾಜನಗರ:ಹುಲಿ ಹೆಜ್ಜೆ‌ಕಂಡು ರೈತರು ಭಾರೀ ಅತಂಕಕ್ಕೆ ಒಳಗಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ಸುತ್ತಾಮುತ್ತಾ ಹುಲಿ ಪ್ರತ್ಯಕ್ಷ ಘರ್ಜನೆ ರೈತರಲ್ಲಿ ಆತಂಕ ಸೃಷ್ಟಿಸಿದೆ ಹಾಗೂ ನಂಜೇದೇವನಪುರ ವೀರನಪುರ ಹಾಗೂ ಯಡಬೆಟ್ಟ ಸುತ್ತಾಮುತ್ತಾ ಹುಲಿ‌ಸಂಚರಿಸಿ ರೈತರ ಸಾಕು ಪ್ರಾಣಿಗಳ‌ ಮೇಲೆ ದಾಳಿ ನಡೆಸಿ ಆತಂಕ‌ ಸೃಷ್ಟಿಸಿದೆ.

ಆ ಭಾಗದಲ್ಲಿ ಕಳೆದ ಮೂರು ತಿಂಗಳಿಂದ ಜಾನುವಾರು
ಗಳ‌ನ್ನು‌ ಕೊಂದು ಅಟ್ಟಹಾಸ ಮೆರೆದಿರುವ ವ್ಯಾಘ್ರವು ಕಲ್ಲು ಕ್ವಾರಿ ಜಮೀನುಗಳ‌ ಪಾಳು ಬಿದ್ದ ಗುತ್ತಿಗಳಲ್ಲಿ ಆಶ್ರಯಿಸಿ ಜಾನುವಾರುಗಳ‌ಮೇಲೆ‌ದಾಳಿ ನಡೆಸಿದೆ.

ಹಲವುದಿನಗಳಿಂದ ಜಾನುವಾರುಗಳ‌ ಮೇಲೆ ಹುಲಿ ನಡೆಸಿ ಕೊಂದು ಆತಂಕ ಸೃಷ್ಟಿಸಿತ್ತು ಆಗ ದಾಳಿ‌ನಡೆಸಿರುವುದು ಹುಲಿಯಲ್ಲ‌ ಎಂದೆ ಅರಣ್ಯ ಇಲಾಖೆ ಸಬೂಬು ಹೇಳುತ್ತಿತ್ತು. ನಂತರ ಯಡಬೆಟ್ಟ ಸಮೀಪದ ಎಣ್ಣೆಹೊಳೆ ಬಳಿ ಹಾಡುಹಗಲೆ ಹುಲಿ ಅಡ್ಡಾಡಿ ಹಸುವೊಂದನ್ನು ಕೊಂದು ಹಾಕಿತ್ತು. ಆಗ ದನಗಾಯಿಗಳು ಹುಲಿ ಸಂಚರಿಸುವ ವಿಡಿಯೋ ಮಾಡಿ ಸಾಮಾಜಿಕ‌ ಜಾಲ ತಾಣದಲ್ಲಿ ಹರಿ ಬಿಟ್ಟಿದ್ರು.

ಇದೀಗ ಮಳೆ‌ಹೆಚ್ಚಾಗಿರುವ ಕಾರಣ ರೈತರ ಜಮೀನುಗಳಲ್ಲಿ ಹುಲಿ ಹೆಜ್ಜೆ ಕಂಡು ರೈತರು ಜಮೀನುಗಳಿಗೆ ತೆರಳಲು ಭಯಪಡುವಂತಾಗಿದೆ.
ಹಾಗಾಗಿ ಮುಂದಿನ ದಿನಗಳಲ್ಲಿ ಅನಾಹುತ ಸಂಭವಿಸುವ ಮುನ್ನೆ ಕೂಡಲೆ ಹುಲಿ ಸೆರೆಗೆ ಮುಂದಾಗುವಂತೆ ರೈತರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ವರದಿ:ಮಹದೇವಪ್ರಸಾದ್ ಹಂಗಳ

Related Articles

Leave a Reply

Your email address will not be published. Required fields are marked *

Back to top button